ಗದಗ ಎಂದರೆ, ತಕ್ಷಣವೇ ಕರ್ನಾಟ ಭರತ ಕಥಾಮಂಜರಿ ಲೇಖಕ ಕುಮಾರ ವ್ಯಾಸ ಎಂದು ಪ್ರಸಿದ್ಧರಾದ ನಾರಾಯಣಪ್ಪನ ಹೆಸರನ್ನು ಮನಸ್ಸಿಗೆ ತರುತ್ತದೆ. ನಾಡು ಕಂಡಂತಹ ಶ್ರೇಷ್ಠ ಕವಿ, ಬರಹಗಾರ, ಸಾಹಿತಿ, ನಾಟಕ ಹಾಗೂ ಹೋರಾಟಗಾರ.ಶ್ರೀ.ಹುಯಿಲಗೋಳ ನಾರಾಯಣ ರಾವ್ ಕೂಡ ಜನಿಸಿದ್ದು ಈ ಪವಿತ್ರ ಭೂಮಿಯಲ್ಲಿಯೇ.

ವಿಪರ್ಯಾಸ ಏನೆಂದರೆ ಈ ಮಹಾನುಭಾವನ ಜೀವನ ಚರಿತ್ರೆ
ಎಷ್ಟು ಹುಡುಕಿದರೂ ಸಿಗುತ್ತಿಲ್ಲ.
ಸ್ಮಾರಕವಾಗಬೇಕಿದ್ದ ಅವರ ಮನೆ ಇಂದು ಪಾಳು ಬಿದ್ದ ಸ್ಥಿತಿಯಲ್ಲಿದೆ.
ನಾರಾಯಣರಾಯರು ಜನಿಸಿದ್ದು 1884 ಅಕ್ಟೋಬರ್ 4ರಂದು. ತಂದೆ-ತಾಯಿ ಕೃಷ್ಣರಾವ್ ಮತ್ತು ಬಹಿಣಕ್ಕ. ಬಾಲ್ಯದ ಶಿಕ್ಷಣವನ್ನು ಗದಗ, ಗೋಕಾಕ ಹಾಗು ಧಾರವಾಡಗಳಲ್ಲಿ ಪೂರೈಸಿದರು. 1902ರಲ್ಲಿ ಧಾರವಾಡದಲ್ಲಿ ಮೆಟ್ರಿಕ್ ಪರೀಕ್ಷೆಯನ್ನು ಮುಗಿಸಿ ಉಚ್ಚ
ಶಿಕ್ಷಣಕ್ಕಾಗಿ ಪುಣೆಯ ಫರ್ಗ್ಯೂಸನ್ ಕಾಲೇಜನ್ನು ಸೇರಿದರು. 1907ರಲ್ಲಿ ಪದವಿಯನ್ನು ಪಡೆದ ಬಳಿಕ ಧಾರವಾಡದ ವಿಕ್ಟೋರಿಯಾ ಪ್ರೌಢಶಾಲೆಯಲ್ಲಿ ಶಿಕ್ಷಕರಾದರು. ಕೆಲಕಾಲದ ನಂತರ ಶಿಕ್ಷಕ ವೃತ್ತಿಯನ್ನು ತ್ಯಜಿಸಿ, ಮುಂಬೈಗೆ ತೆರಳಿ, ಕಾನೂನು ಪದವಿಯನ್ನು ಪಡೆದು 1911ರಲ್ಲಿ ವಕೀಲಿ ವೃತ್ತಿಯನ್ನು ಆರಂಭಿಸಿದರು.

ನಾರಾಯಣರಾಯರು ಮೂಲತಃ ನಾಟಕಕಾರರು.
ಕನ್ನಡ ರಂಗಭೂಮಿಗಾಗಿ ಕಾಲ್ಪನಿಕ, ಐತಿಹಾಸಿಕ, ಪೌರಾಣಿಕ, ಸಾಮಾಜಿಕ ಹೀಗೆ ವಿವಿಧ ಬಗೆಯ ನಾಟಕಗಳನ್ನು ರಚಿಸಿ ಪ್ರದರ್ಶಿಸಿದರು. ಇವರ ಅನೇಕ ಕವನಗಳು ಅಂದಿನ ಪತ್ರಿಕೆಗಳಾದ ಜೈ ಕರ್ನಾಟಕ ವೃತ್ತ, ಪ್ರಭಾತ, ಧನಂಜಯ ಮೊದಲಾದವುಗಳಲ್ಲಿ ಪ್ರಕಟವಾಗಿವೆ. ನಾರಾಯಣರಾಯರು ತಮ್ಮ ನಾಟಕಗಳಿಗಾಗಿ ಗೀತೆಗಳನ್ನು ರಚಿಸಿದ್ದರು.
ಉದಯವಾಗಲಿ ಚೆಲುವು ಕನ್ನಡ ನಾಡು
ಗೀತೆ ರಚಿಸಿಸುವ ಮೂಲಕ ಕರ್ನಾಟಕ ಏಕೀಕರಣ ಹೋರಾಟದ ಕಿಚ್ಚು ಹೆಚ್ಚಿಸಿದರು.
ರಾಯರ "ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು" 1924ರಲ್ಲಿ, ಗಾಂಧೀ ಅಧ್ಯಕ್ಷತೆಯಲ್ಲಿ, ಬೆಳಗಾವಿಯಲ್ಲಿ ಜರುಗಿದ ಕಾಂಗ್ರೆಸ್ ಅಧಿವೇಶನದಲ್ಲಿ ಸ್ವಾಗತಗೀತೆಯಾಗಿ ಹಾಡಲಾಗಿತ್ತು.
ಆಗಿನ್ನೂ ಬಾಲಕಿಯಾಗಿದ್ದ ಗಂಗೂಬಾಯಿ ಹಾನಗಲ್ ಈ ಗೀತೆಯನ್ನು ಅಂದು ಹಾಡಿದ್ದರು.
ಸಿದ್ದಪ್ಪ ಕಂಬ್ಳಿ ಅವರ ಅನುಪಸ್ಥಿತಿಯಲ್ಲಿ ಕರ್ನಾಟಕ ಏಕೀಕರಣ ಸಮಿತಿ ಶುರುವಾಗಿದ್ದು ಅದೇ ದಿನ ಅದೇ ಜಾಗದಲ್ಲಿ.

ನಾರಾಯಣ ರಾವ್ ಅವರು 1971 ರಲ್ಲಿ ಇಹಲೋಕ ತ್ಯಜಿಸಿದರು ಎಂದು ತಿಳಿದು ಬರುತ್ತದೆ,
ಆದರೆ ಅವರ ಎಂಬತ್ತು ವರ್ಷಗಳ ಜೀವನ ಪಯಣ, ಅವರ ಕುಟುಂಬ, ಅವರು ನಿಧನರಾದ ದಿನಾಂಕ ಕೂಡ ಎಷ್ಟು ಹುಡುಕಿದರೂ ಸಿಗುತ್ತಿಲ್ಲ.

ಹೋರಾಟಗಾರರೇ ಆಗಲಿ
ಅಥವಾ ಓಲಾಟಗಾರರೇ ಇರಲಿ ಎಂದು ಉದಯವಾಗುವುದು ನಮ್ಮ ಚೆಲುವ ಕನ್ನಡ ನಾಡು ಎಂದು ಕೇಳಬೇಕಾಗಿದೆ.

ಇದು ನಾವುಗಳು ಅವಮಾನದಿಂದ ತಲೆ ತಗ್ಗಿಸಬೇಕಾದ ಸಂಗತಿಯಲ್ಲವೇ ?????

#ವಂದೇಮಾತರಂ
#ಉದಯವಾಗಲಿನಮ್ಮಚೆಲುವಕನ್ನಡನಾಡು
You can follow @Sheshapatangi.
Tip: mention @twtextapp on a Twitter thread with the keyword “unroll” to get a link to it.

Latest Threads Unrolled: