ಸಾಮಾನ್ಯವಾಗಿ ಕೆ ಸ್ ಅಶ್ವಥ್ ಅಂತ ಹೇಳಿದಾಗ ಜ್ಞಾಪಕಕ್ಕೆ ಬರದೇ ಹೋದರೂ
ಚಾಮಯ್ಯ ಮೇಷ್ಟ್ರು ಅಂದ ತಕ್ಷಣ ನೆನಪಿಗೆ ಬರುವ ವ್ಯಕ್ತಿ ಇವರು.

ಕಾರಗನಹಳ್ಳಿ ಸುಬ್ಬರಾಯ ಅಶ್ವಥನಾರಾಯಣ ಇವರ ಸಂಪೂರ್ಣ ಹೆಸರು.
ಜನನ 25 -05 -1925 ರಂದು ಹೊಳೆನರಸೀಪುರದಲ್ಲಿ.
ಅಲ್ಲಿಯೇ ದಳವಾಯಿ ಶಾಲೆಯಲ್ಲಿ ಕಲಿಕೆ ಮುಂದೆ ಮೈಸೂರಿನ ಮಹಾರಾಜ ಕಾಲೇಜಿನಲ್ಲಿ
ಬಿಕಾಂ ಪದವಿ ಪಡೆದರು ಆಗ ಅವರು 7TH ರಾಂಕ್ ಪಡೆದಿದ್ದರು.

ಮುಂದೆ ವಿದ್ಯಾಭಾಸ ಮಾಡುವ ಅವಕಾಶವಿದ್ದರೂ ಅಶ್ವಥ್ ಅವರು 1942ರಲ್ಲಿ ಓದಿಗೆ ತಿಲಾಂಜಲಿ ಹೇಳಿ ಬ್ರಿಟಿಷರೇ ಭಾರತ ಬಿಟ್ಟು ತೊಲಗಿ ಎಂದು ಹೋರಾಟದಲ್ಲಿ ಪಾಲ್ಗೊಂಡರು.
ಎರಡು ವರ್ಷಗಳ ನಂತರ ಅವರು ಫುಡ್ ಇನ್ಸ್ಪೆಕ್ಟರ್ ಆಗಿ ಕೆಲಸ ಮಾಡಿ ತದನಂತರ ಸ್ಟೆನೋಗ್ರಾಫ್ರ್ ಆಗಿ ಹತ್ತು ವರ್ಷಗಳ
ಕಾಲ ಸರ್ಕಾರಿ ಸೇವೆಯಲ್ಲಿದ್ದರು.

ಆಕಾಶವಾಣಿ ಪ್ರಾಯೋಜಿತ ನಾಟಕಗಳಲ್ಲಿ ಅಶ್ವಥರವರು ಪಾಲ್ಗೊಳ್ಳಲು ಶುರು ಮಾಡಿದರು, ಆಗ ಕೆ ಸುಬ್ರಮಣ್ಯಮ್ ಅವರ ನಟನೆ ಗುರುತಿಸಿ "ಸ್ತ್ರೀರತ್ನ" ಚಲನಚಿತ್ರದ ಮೂಲಕ ಅವರನ್ನು ಕನ್ನಡ ಸಿನಿಮಾ ರಂಗಕ್ಕೆ 1956 ರಲ್ಲಿ ತಂದರು.

ಅವರ ಜೀವಿತಾವಧಿಯಲ್ಲಿ ಅಶ್ವಥರವರು ಸರಿಸುಮಾರು 370 ಚಿತ್ರಗಳಲ್ಲಿ ನಟಿಸಿದರು
ಅದರಲ್ಲಿ ರಾಜ್ ಕುಮಾರ್ ಜೊತೆ ಬರೋಬ್ಬರಿ 98 .. (ಏನ್ ರೆಕಾರ್ಡ್ ಆಲ್ವಾ)

ನಿಮಗೆ ಗೊತ್ತೇ, ಅಶ್ವಥ್ ಅವರು ಆಂಗ್ಲ ಭಾಷೆಯ SEVEN WONDERS OF THE WORLD ಎಂಬ ಸಿನಿಮಾದಲ್ಲಿ ನಟಿಸಿದ್ದಾರೆ, ಕನ್ನಡದ ನಟನೊಬ್ಬ ಪ್ರಥಮ ಬಾರಿಗೆ ಕಲರ್ ಸಿನಿಮಾದಲ್ಲಿ ನಟಿಸಿದ್ದು ಅದೇ ಮೊದಲು.

ಈ ಮಹಾನ್ ಕಲಾವಿದ ಯಾರ ಬಳಿಯೂ ದೇಹಿ ಅಂದವರಲ್ಲ,
ಮೂರು ರಾಷ್ಟ್ರ ಪ್ರಶಸ್ತಿ ಹಾಗೂ ಹಲವಾರು ರಾಜ್ಯ ಪ್ರಶಸ್ತಿ ಪಡೆದ ಅವರು 2008 ರಲ್ಲಿ ತುಮಕೂರು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟ್ರೇಟ್ ಪ್ರಶಸ್ತಿ ಪಡೆದರು.

2010 ರಲ್ಲಿ ಕಾಶಿಯಾತ್ರೆ ಮುಗಿಸಿ ಬಂದಾಗ ಅವರ ಆರೋಗ್ಯದಲ್ಲಿ ಏರುಪೇರಾಯಿತು, ಜನವರಿ 18 ರಂದು ಲಕ್ಷಾಂತರ ಅಭಿಮಾನಿಗಳನ್ನು ಆಗಲಿ ಇಹಲೋಕ ಸೇರಿದರು.
You can follow @Sheshapatangi.
Tip: mention @twtextapp on a Twitter thread with the keyword “unroll” to get a link to it.

Latest Threads Unrolled: